ಕವನ ಹುಟ್ಟಿತು ಕೇಳಾ

ಹುಟ್ಟಿತು
ಕವನ ಹುಟ್ಟಿತೂ
ಕವನ ಹುಟ್ಟಿತೂ ಕೇಳಾ

ಎಲ್ಲಿಂದಲೋ ಹೇಗೋ ಏನೋ
ಹಾರಿಬಂದ ಕನಸಿನ ಬೊಟ್ಟು
ಮೈಯೊಳಗೆ ನೆಟ್ಟು
ನೆತ್ತಿಯಿಂದ ಹೆಬ್ಬೆರಳ
ತುದಿಯೊರೆಗೂ
ಬಯಕೆ ಬಾಯ್ತೆರೆದಾ ಬಸುರು.

ದಿನದಿನಕು ಕಣ್‌ಮೂಗು ಮೂಡಿ
ಮೈಕೈ ತುಂಬಿ ಹಾಡಿ
ಒಳಗೇ ಬಲಿಯುತಾ
ಕನಸಿನ ಜೀವಭಾವ
ದಿನತುಂಬಿ ಬಂದು
ಏನೋ ನೋವು ಎದೆಯಲ್ಲಿ ನಿಂದು

ಎಂದು ಬರುವುದೋ
ಎಂತು ಬರುವುದೋ
ಬಾರದೇ ಉಳಿವುದೋ
ಯಾವ ರೂಪವೋ
ಹಂಬಲಿಸಿ ಕಾದುಕೂತ
ಕಸೂತಿ ಕನಸವಸ್ತ್ರ

ಕಾಯುವಿಕೆಯ ಅನಂತತೆಯಲ್ಲೇ
ಅಮೂರ್ತ ಕನಸು ಪಕ್ವಗೊಂಡು
ಮೂರ್ತ ಶರೀರದ ಕೈಹಿಡಿದು
ಹೊರಬಿದ್ದ ಗಳಿಗೆ ಕನಸು ನನಸಾಯಿತು
ಹನಿಯು ಸಾಗರವಾಯಿತು
ಭಾವವೊಂದು ಕವನವಾಯಿತು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೮
Next post ಪ್ರಶ್ನೆಯಿಲ್ಲದ ಬದುಕೊಂದು ಬದುಕೆ

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

cheap jordans|wholesale air max|wholesale jordans|wholesale jewelry|wholesale jerseys